Saturday, May 23, 2020

ನಾವು ಬದಲಾವಣೆಯೊಳಗೋ? ಬದಲಾವಣೆ ನಮ್ಮೊಳಗೋ ?

                     
                        ಎಸ್ ಪಿ ತೇಜರಾಜು.


 ಮಾನವನೆ ಹೀಗೆ ತನ್ನ ಮೂಗಿನ ನೇರಕ್ಕೆ ಏನು ಗೋಚರಿಸುತ್ತದೆ ಅದನ್ನೇ ಸತ್ಯವೆಂದರಿತಿರುತ್ತಾನೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯಗಳು ಮತ್ತೊಬ್ಬರಿಗಿಂತ ವಿಭಿನ್ನವಾಗಿರುತ್ತದೆ ಏಕೆಂದರೆ ಪ್ರತಿಯೊಬ್ಬರೂ ಕೂಡ ಬೆಳೆದಂತಹ ಪೂರಕ ವಾತಾವರಣ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ.

 ಬದಲಾವಣೆಯೇ ಜಗದ ನಿಯಮವೆಂಬಂತೆ ಭೂಮಿಯು ಸಹ ಮಾನವನ ಉಗಮಕ್ಕೆ ಬೇಕಾದಂತಹ ಪೂರಕ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಸುಮಾರು 200 ಕೋಟಿ ವರ್ಷಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅಂದಾಜಿಸಲಾಗಿದೆ ಹೀಗಾಗಿ ಭೂಮಿಗೆ ಇಂದು
460ಕೋಟಿ ವರ್ಷ ವಯಸ್ಸಾಗಿದೆ ಎಂದು ನಿರ್ಧರಿಸಲಾಗಿದೆ.

 ಇಷ್ಟೆಲ್ಲಾ ನಿಧಾನಗತಿಯಲ್ಲಿ ಸಾಗಿದೆ ಬದಲಾವಣೆ ಮಾನವನುಗಮವಾದಗಲಂತೂ ಮಾನವನ ನಡವಳಿಕೆಯೊಂದಿಗೆ ಪರಿಸರಕ್ಕೂ ಕೂಡ  ತ್ವರಿತಗತಿಯ ಬದಲಾವಣೆ ಸಿಕ್ಕಿತು. ಮಾನವನ ಉಗಮ, ನಾಗರಿಕತೆಯ ಬೆಳವಣಿಗೆ, ರಾಜರ ಆಳ್ವಿಕೆ, ಬಹಳ ದೊಡ್ಡ ಇತಿಹಾಸವನೊಂದಿದ್ದರು ಇದಾದ ಬಳಿಕ ಅಂದರೆ ಇಂದಿನಿಂದ ಸುಮಾರು ಐದು ಶತಮಾನಗಳ ಹಿಂದಿನಿಂದಲಂತು ಮಾನವನ ಇತಿಹಾಸದಲ್ಲಿ ಕಂಡರಿಯದಂತಹ ಆವಿಷ್ಕಾರಗಳು ನಡೆದಿವೆ ಅವುಗಳಲ್ಲಿ ಪ್ರಮುಖವೆಂದರೆ :

1.1712 ರಲ್ಲಿ Thomus Newcomen ಹಬೇ ಯಂತ್ರವನ್ನು(Steam engine) ಆವಿಷ್ಕರಿಸಿದರು.

2.1750 ರಲ್ಲಿ Benjamin Fraklin  ವಿದ್ಯುತ್ ಶಕ್ತಿಯನ್ನು(Electricity) ಆವಿಷ್ಕರಿಸಿದರು.

3.1766 ರಲ್ಲಿ Jacob Christin Schaefer ವಾಷಿಂಗ್ ಮಷೀನ್(washing machine) ಅನ್ನು,

4.1805 ರಲ್ಲಿ Oliver Evans ರೆಫ್ರಿಜರೇಟರ್( Refrigerator) ಅನ್ನು,

5.1820 ರಲ್ಲಿ Baron karlvon Drais  ಮೋಟಾರ್ ವೆಹಿಕಲ್ ಅನ್ನು,

6.1836 ರಲ್ಲಿ Charles Babbage  ಗಣಕಯಂತ್ರವನ್ನು(computer),

7.1840 ರಲ್ಲಿ Alexander wollcott  ಕ್ಯಾಮರಾವನ್ನು(camera) ,

8.1873 ರಲ್ಲಿ Montgolfier Brothers ಹಾಟ್ ಏರ್ ಬಲೂನ್ (Hot air balloon) ಅನ್ನು,

9.1876 ರಲ್ಲಿ Alexander grahambell  ಫೋನನ್ನು(Phone)

10.1879 ರಲ್ಲಿ Thomas Edison ಬಲ್ಪನ್ನು(Bulb),

11.1895 ರಲ್ಲಿ Guglilmo Marconic  ರೇಡಿಯೋವನ್ನು(Radio),

12.1902 ರಲ್ಲಿ Willis Carrier - AC ಏರ್ ಕಂಡೀಶನರ್ ನ್ನು,

13.1903 ರಲ್ಲಿ Right brother ವಿಮಾನವನ್ನು,

14.1920 ರಲ್ಲಿ Philo T Farnsworth- TV (Television)ಆವಿಷ್ಕರಿಸಿದರು.

15.1957 ರಲ್ಲಿ ಪ್ರಥಮ ಮಾನವ ನಿರ್ಮಿತ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಯಿತು.

 ಇಷ್ಟೆಲ್ಲಾ ಆವಿಷ್ಕಾರಗಳು ನಡೆದ ಬಳಿಕವಂತೂ ಪ್ರತಿ  ಕ್ಷೇತ್ರಕ್ಕೂ ಮತ್ತಷ್ಟು ಪುಷ್ಟಿ ಸಿಕ್ಕಿದಂತಾಯಿತು ಇದರಿಂದಾಗಿ ಮಂಗಳಯಾನದಂತಹ ಬಾಹ್ಯಾಕಾಶ ಯೋಜನೆಗಳು ಹಾಗೂ 400 ಕಿಲೋಮೀಟರ್ ಗಂಟೆಗೆ ಓಡಬಲ್ಲ ಬುಲೆಟ್ ರೈಲುಗಳು ಆವಿಷ್ಕಾರಗೊಂಡವು.

 ಎಲ್ಲರಿಗೂ ನೆನಪಿರಬಹುದು ನಮ್ಮ ಶಾಲಾ ಶಿಕ್ಷಕರು ಪಾಠವನ್ನು ಹೇಳಿಕೊಡುವುದರೊಟ್ಟಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆಯೂ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಇದ್ದಂತಹ ಕೆಲವು ಪದ್ಧತಿಗಳ ಬಗ್ಗೆಯೂ ಹೇಳಿಕೊಡುತ್ತಿದ್ದರು. ಮನೆಯಲ್ಲಿಯೇ ಕುಳಿತುಕೊಂಡು ನಮಗೆ ಬೇಕಾದಂತಹ ಪದಾರ್ಥಗಳನ್ನು ಆರ್ಡರ್ ಮಾಡುವುದರ ಮೂಲಕ ಮನೆಯ ಬಾಗಿಲಿಗೆ ತರುಹಿಸಿಕೊಳ್ಳಬಹುದು ಎಂದು ಹೇಳಿದಾಗ ನಮಗೆ ಆಶ್ಚರ್ಯವಾಗಿದ್ದು ಉಂಟು ಆದರೆ ನೋಡಿ ಈ ಎಲ್ಲಾ ಪದ್ಧತಿಗಳನ್ನು ನಮ್ಮ ತಲೆಮಾರಿನಲ್ಲಿ ನೋಡಿದ್ದಾಗಿದೆ.

 ಕೈಯಲ್ಲೊಂದು ಪುಟ್ಟ ಫೋನ್ ಇದ್ದರೆ ಸಾಕು ಇಡೀ ಪ್ರಪಂಚದ ಮೂಲೆ ಮೂಲೆಯಲ್ಲಿ ನಡೆಯುತ್ತಿರುವ  ಪ್ರಚಲಿತ ವಿದ್ಯಾಮಾನಗಳಬಗ್ಗೆ ನಾವು ಕುಳಿತಿರುವ ಜಾಗದಲ್ಲಿಯೇ ತಿಳಿದುಕೊಳ್ಳುವಷ್ಟು ಮಾಹಿತಿ ಸುಲಭವಾಗಿದೆ. ನಮ್ಮ ತಲೆಮಾರಿನಲ್ಲಿ ಕಂಡ ಕೆಲವಷ್ಟು ಬದಲಾವಣೆಗಳೆಂದರೆ :

1.ಊಟಕ್ಕಾಗಿ ಹೋಟೆಲ್ ಹುಡುಕಿಕೊಂಡು ಹೋಗಬೇಕಾದಂತಹ ಪ್ರಮೇಯ ತಪ್ಪಿದೆ ನಾವು ಕುಳಿತ ಜಾಗದಲ್ಲಿಯೇ ಬೇಕಾದ ಆಹಾರವನ್ನು ತರಿಸಿಕೊಳ್ಳಬಹುದಾದಂತಹ ಅಪ್ಲಿಕೇಶನ್ಗಳು(Uber eats,Swiggy)ಬಂದಿದೆ.

2.ಮನೆಗೆ ಬೇಕಾದಂತಹ ಗೃಹೋಪಯೋಗಿ ಉಪಕರಣಗಳನ್ನು ತರಿಸಿಕೊಳ್ಳಬಹುದಾದಂತಹ
Tata cliq  ಅಪ್ಲಿಕೇಶನ್ ಗಳಿವೆ.

3. ಸರಳ ಪೇಮೆಂಟ್ ಗಾಗಿ Bheam app, Google pay, paytm ಗಳಿಗೆ.

4. ಪ್ರತಿಯೊಂದು ಬ್ಯಾಂಕ್ ಕೂಡ ತನ್ನ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸಬಹುದಾದಂತಹ ಅವಕಾಶಗಳನ್ನು ನೀಡಿದೆ.

5. ಹೊರಗೆ ಓಡಾಡಲು Ola, Uber auto,Rapido Appಗಳಿವೆ. 

6. ನಮಗೆ ಬೇಕಾದಂತಹ ಪುಸ್ತಕಗಳನ್ನು Internetನ ಮೂಲಕ ಓದಬಹುದಾಗಿದೆ.

7. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯಲು ಅನೇಕ ಅಪ್ಲಿಕೇಶನ್( Gramasadak, Dishank,etc) ಗಳಿವೆ.

8. ಹವಾಗುಣಕ್ಕೆ ತಕ್ಕಂತೆ ಬೆಳೆ ಬೆಳೆಯಬಹುದಾದಂತಹ ಕೃಷಿ ಮಾಹಿತಿಗಾಗಿ ಕೃಷಿ ಕೈಪಿಡಿಯಂತಹ ಅಪ್ಲಿಕೇಶನ್ಗಳು ಬಹಳಷ್ಟಿವೆ.

9. ದೂರದ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ಮಾಹಿತಿ ನೀಡಲು ಬಹಳಷ್ಟು ಅಪ್ಲಿಕೇಶನ್ ಗಳಿವೆ.

10. ಪ್ರತಿಯೊಂದು ನ್ಯೂಸ್ ಚಾನಲ್ ರವರು ಅವರದೇ ಆದಂತಹ ನ್ಯೂಸ್ ಅಪ್ಲಿಕೇಶನ್ಗಳನ್ನು ಬಿಡುಗಡೆಗೊಳಿಸಿದ್ದಾರೆ.

11. ದೂರದ ವ್ಯಕ್ತಿಗಳನ್ನು ಹತ್ತಿರವಾಗಿರುವಂತೆ ಮಾಡಲು Facebook, whats app, Telegram, Hike ನಂತಹ ಸೋಶಿಯಲ್ ಮೀಡಿಯಾಗಳಿಗೆ.

12. ಕೋಟಿಗಟ್ಟಲೆ ವ್ಯವಹಾರವನ್ನು ನಡೆಸುವಂತಹ  ಬಿಸಿನೆಸ್ ಗಳು ಕೂಡ ತಮ್ಮ ಅಕೌಂಟನ್ನು Tally ಯಂತಹ ಸಾಫ್ಟ್ವೇರ್ ಗಳಲ್ಲಿ ಸ್ಟೋರ್ ಮಾಡಲಾಗುತ್ತದೆ.

13. ತಲುಪಬೇಕಾದಂತಹ ಪ್ರದೇಶದ ಮಾಹಿತಿಯನ್ನು ನಿಖರವಾಗಿ ನೀಡಿದ್ದಲ್ಲಿ  ನಾವು ಇರುವ ಪ್ರದೇಶದಿಂದ ತಲುಪಬೇಕಾದ ಪ್ರದೇಶಕ್ಕೆ ಇರುವ ಅಂತರವನ್ನು ನಿಖರವಾಗಿ ಹೇಳುವಂತಹ ಅಪ್ಲಿಕೇಶನ್ ಗಳಿವೆ.

 ಇವುಗಳೆಲ್ಲವೂ ಒಬ್ಬ ಅವಿದ್ಯಾವಂತರೂ ಕೂಡ ಬಳಸಬಹುದಾದಷ್ಟು ಸರಳವಾಗಿರುವುದರಿಂದ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಗಳಿವೆ. ಈ ರೀತಿಯಾದಂತಹ ಬದಲಾವಣೆಗಳು ನಮ್ಮದೇ ಆದಂತಹ ಕೆಲಸಗಳನ್ನು ಸರಳಗೊಳಿಸಿರುವುದರಿಂದ ಪ್ರತಿಯೊಬ್ಬರು ಈ ಬದಲಾವಣೆಗಳೊಂದಿಗೆ ಹೊಂದಿಕೊಂಡಿದ್ದಾರೆ.

 ಇಷ್ಟೆಲ್ಲಾ ತ್ವರಿತಗತಿಯ ಬದಲಾವಣೆಗಳು ಮಾನವನಿಂದಾಗಿದ್ದರೂ ಕೂಡ ಪ್ರಕೃತಿಯಿಂದ ಮಾನವನು ಕಲಿಯಬೇಕಾಗಿರುವುದು ಬಹಳಷ್ಟಿದೆ.
 ನೂರಾರು ಕೋಟಿ ವರ್ಷಗಳಿಂದ ಬೆಳೆದು ನಿಂತಿರುವಂತಹ ಸಸ್ಯಸಂಪತ್ತು ಮಾನವನೆದುರೇ ಇದೆ. ನೂರಾರು ಅಡಿ ಎತ್ತರ, ಸಾವಿರಾರು ವರ್ಷಗಳು ಬದುಕಬಲ್ಲಂತಹ ದೈತ್ಯ ಮರಗಳು ಕೂಡ ನಮ್ಮ ಕಣ್ಣುಮುಂದೆಯೇ ಇದೆಯಲ್ಲವೇ? ಹಾಗಾದರೆ ಹೀಗೊಮ್ಮೆ ಯೋಚಿಸಿ ನಿಸರ್ಗದ ಬೆಳವಣಿಗೆಯೂ ಕೂಡ ನಮ್ಮ ಟೆಕ್ನಾಲಜಿಯಷ್ಟು ವೇಗದಲ್ಲಿಯೇ ಬೆಳೆಯಿತೇ? ಇಲ್ಲವಲ್ಲ  ತೋಟಗಾರಿಕೆಯಲ್ಲಿಯೂ ಕೂಡ ಅನೇಕ ಅನ್ವೇಷಣೆಗಳು ನಡೆದಿದ್ದು ಏಳು ವರ್ಷಗಳಾದ ಬಳಿಕ ಫಲಕೊಡಬೇಕಾದಂತಹ ತೆಂಗಿನ ಮರವನ್ನು ಇಂದು 4 ವರ್ಷಕ್ಕೆ ಕಾಯಿ ಬಿಡುವಂತೆ ಮಾಡಲಾಗಿದೆ ಆದರೆ ನಿಸರ್ಗದ ಅದ್ಭುತ ನೋಡಿ ಏನೇ ಟೆಕ್ನಾಲಜಿ ಮುಂದುವರೆದರು ಕೂಡ ಮರ ತನ್ನ ಬೆಳವಣಿಗೆಗೆ ನಾಲ್ಕು ವರ್ಷವನ್ನಾದರೂ ತೆಗೆದೇಕೊಳ್ಳುತ್ತದೆ ಅಲ್ಲವೇ? ಹೆಚ್ಚು ಆಹಾರ ಪದಾರ್ಥಗಳನ್ನು ಬೆಳೆದು ಹೆಚ್ಚು ಹಣ ಸಂಪಾದನೆ ಮಾಡಬೇಕೆಂಬ ಆಸೆಯಲ್ಲಿ ಭೂಮಿಗೆ ವಿಷ ಉಣಿಸಿದ್ದಾಗಿದೆ. ಮೇಲ್ನೋಟಕ್ಕೆ ಸರಿ ಎನಿಸಿದರೂ ಕೂಡ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.

 ಬದಲಾವಣೆಗಳೊಂದಿಗೆ ಬದಲಾಗಬೇಕೆನ್ನುವುದೇನೋ ನಿಜ ಆದರೆ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ಬೆಲೆಕಟ್ಟಲಾಗದ ಕಾಡುಗಳನ್ನು ಮುಳುಗಿಸಿ ಲಕ್ಷಾಂತರ ರೂಪಾಯಿಯ ಎಲೆಕ್ಟ್ರಿಸಿಟಿ ಪಡೆಯುವಂತಹ ಬದಲಾವಣೆಗಳು ಬೇಕೆ? ಹೆಚ್ಚುತ್ತಿರುವ ನಗರೀಕರಣದಿಂದ ಕೊಳಚೆ ನೀರನ್ನು ಕೆರೆಗಳಿಗೆ ಹರಿ ಬಿಡುತ್ತಿರುವುದು, ಕಸದ ರಾಶಿ ಬೆಟ್ಟದಷ್ಟುತ್ತರ  ಏರುತ್ತಿರುವುದು, ಸುತ್ತಮುತ್ತಲ ಕೃಷಿಯಾಧಾರಿತ ಜಮೀನುಗಳನ್ನು ಲೇಔಟ್ ಗಳಾಗಿ ಪರಿವರ್ತಿಸುತಿರುವಂತಹ ಬದಲಾವಣೆಗಳು ಬೇಕೆ? ಮನೋರಂಜನೆಗಾಗಿ ಇರುವ ಕಾಡುಗಳನ್ನು ಕಡಿದು ರೆಸಾರ್ಟ್ ಗಳಾಗಿ ಪರಿವರ್ತನೆಗೊಳ್ಳುತ್ತಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಕಾರ್ಖಾನೆಗಳು ಹೊರಸೂಸುತ್ತಿರುವಂತಹ ವಿಷಾನಿಲಗಳು ವಾತಾವರಣದಲ್ಲಿ ಬೆರೆತು ಆಮ್ಲ ಮಳೆಗೆ(Asid rain) ಕಾರಣವಾಗುತ್ತಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಗಣಿಗಾರಿಕೆಯಿಂದ ಇರುವ ಕಾಡುಗಳನ್ನು ಚಿದ್ರಗೋಳಿಸಿದ್ದೇವಲ್ಲ ಇಂತಹ ಬದಲಾವಣೆಗಳು ಬೇಕೆ? ಆಳ ಸಮುದ್ರದ ಮೀನುಗಾರಿಕೆಯಿಂದಾಗಿ ಸಮುದ್ರದ ಜೀವಿಗಳ ಸಂತಾನಕ್ಕೆ ಕುತ್ತು ಬಂದಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ರಸ್ತೆ ಅಗಲೀಕರಣಕ್ಕಾಗಿ ಲಕ್ಷಾಂತರ ಮರಗಳನ್ನು ಇಂದಿಗೂ ಕೂಡ ಧರೆಗುರುಳುಸುತ್ತಿದ್ದೇವಲ್ಲ ಇಂತಹ ಬದಲಾವಣೆಗಳು ಬೇಕೆ? ನದಿ ತಿರುವು ಯೋಜನೆಗಳಿಂದಾಗಿ ಕರಾವಳಿಯ ಜನರ ಜೀವನ ನಿರ್ವಹಣೆಗೆ ಕುತ್ತು ಬಂದಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಏಕ ಸಸ್ಯವರ್ಗ ನೆಡುತೋಪುಗಳಿಂದಾಗಿ ಜೀವವೈವಿಧ್ಯದ ಕೊಂಡಿಯನ್ನೇ ನಾಶಗೊಳಿಸಲಾಗಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ನ್ಯೂಕ್ಲಿಯರ್ ವಿದ್ಯುತ್ ಘಟನೆಗಳಿಂದಾಗಿ ಸುತ್ತಮುತ್ತಲ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರದ ಮಟ್ಟ ಹೆಚ್ಚಾಗಿ ಅನೇಕ ದ್ವೀಪಗಳು ಮುಳುಗಿರುವುದರೋಟ್ಟಿಗೆ ಹವಳದಿಬ್ಬಗಳು ಸಾಯುತ್ತಿದೆಯಲ್ಲ ಇಂತಹ ಬದಲಾವಣೆಗಳು ಬೇಕೆ? ಒಂದೊಮ್ಮೆ ಯೋಚಿಸಿ. ಪರಿಸರದ ಪ್ರೇಮಿಗಳೇನು ಅಭಿವೃದ್ಧಿಯ ವಿರೋಧಿಗಳಲ್ಲ ಬದಲಿಗೆ ನಮ್ಮ ಅಭಿವೃದ್ಧಿಗಳೆಲ್ಲವೂ ಪರಿಸರಕ್ಕೆಪೂರಕವಾಗಿರಬೇಕೆನ್ನುವುದೇ ಪರಿಸರಾಸಕ್ತರ ಆಶಯವಾಗಿದೆ.

6 comments: