ಎಸ್. ಪಿ. ತೇಜರಾಜು
ತಿಳಿದೋ ತಿಳಿಯದೆಯೋ ನಾವೆಲ್ಲರೂ ಓಟದ ಕಣದಲ್ಲಿ ಸ್ಪರ್ಧಿಗಳಗಿದ್ದೇವೆ ದುರ್ದೈವದ ಸಂಗತಿಯೆಂದರೆ ಇಲ್ಲಿ ಸೇರಿರುವವರಾರಿಗೂ ಕೂಡ ಓಟದ ಉದ್ದೇಶ ತಿಳಿದಿಲ್ಲ ಹಾಗೂ ನಾವೇಕೆ ಈ ಓಟದಲ್ಲಿ ಭಾಗವಹಿಸಬೇಕೆಂದು ಆಲೋಚನೆಯೂ ಇಲ್ಲ, ಈ ಓಟ ಇನ್ನಾವುದೂ ಅಲ್ಲ ಇದು ಜಗತ್ತಿನ ಆರ್ಥಿಕತೆಯ ಓಟ. ಈ ಓಟದಲ್ಲಿ ನಾವು ಎಷ್ಟರ ಮಟ್ಟಿಗೆ ಮಗ್ನರಾಗಿ ಬಿಟ್ಟಿದ್ದೇವೆ ಎಂದರೆ ನಮ್ಮ ನಾಲ್ಕು ಚೌಕಟ್ಟಿನ ಜ್ಞಾನವನ್ನು ಮೀರಿ ಬೇರೆ ವಿಷಯಗಳಿವೆ ಎಂಬ ಪರಿಕಲ್ಪನೆ ಇಲ್ಲದವರಾಗಿದ್ದಾರೆ.
ನಮ್ಮ ಪೂರ್ವಜರ ಪರಿಸ್ಥಿತಿ ಹೀಗಿರಲಿಲ್ಲ ಯಾವುದೇ ವಿಷಯವಾದರು ನಂಬಿಕೆ ಇಡುತ್ತಿದ್ದರು ಹಾಗೂ ಅವರ ನಂಬಿಕೆಗಳೆಲ್ಲವೂ ಸತ್ಯಗಳೇ ಆಗಿರುತ್ತಿದ್ದವು. ಮಳೆ ನಕ್ಷತ್ರಗಳಲ್ಲಿ ನಂಬಿಕೆ ಇಡುತ್ತಿದ್ದರು ಅದೇ ಪ್ರಕಾರ ಮಳೆ ಬೆಳೆಗಳಾಗಿ ಸುಭಿಕ್ಷವಾಗಿದ್ದರು. ಆಚಾರ-ವಿಚಾರ, ಹಬ್ಬ-ಹರಿದಿನಗಳು, ಆಹಾರ ಪದ್ಧತಿಗಳಿಗೆ ಮಹತ್ವವನ್ನು ನೀಡಿದ್ದರಿಂದ ಹೆಚ್ಚು ಖುಷಿಯಾಗಿದ್ದರು.
ವೈಜ್ಞಾನಿಕ ಚೌಕಟ್ಟಿನಲ್ಲೇ ಪ್ರತಿ ವಿಷಯಗಳನ್ನು ತಾಳೆ ಮಾಡಿ ನೋಡಬೇಕೆಂಬ ನಮ್ಮ ಈ ತಲೆಮಾರು ಅವರ ನಂಬಿಕೆಗಳನ್ನೆಲ್ಲವನ್ನು ಮೂಲೆಗುಂಪಾಗಿಸಿ, ಪದ್ಧತಿಗಳನ್ನು ವಿರೋಧಿಸಿ ನಾವು ಬೇರೆ ಮಾರ್ಗದಲ್ಲಿ ಅವರನ್ನು ಮೀರಿದ ಮೇಧಾವಿಗಳ ಆಗುತ್ತೇವೆಂಬ ಹುಚ್ಚು ಆತ್ಮವಿಶ್ವಾಸದಲ್ಲಿ ಮುನ್ನಡೆದವು ಈಗ ಇದರಲ್ಲಿಯೂ ಸಾಧನೆ ಮಾಡಲಾಗದೆ ಹಿಂದಿನ ಪದ್ಧತಿಗಳಿಗೂ ಹಿಂತಿರುಗ ಲಾಗದೆ ಇರುಳಿನಲ್ಲಿ ಕಂಡ ಬಾವಿಗೆ ಹಗಲು ಆರಿ ಒದ್ದಾಡುತ್ತಿದ್ದೇವೆ.
ಪ್ರಕೃತಿಯ ಜೊತೆ ಜೊತೆಗೆ ಜೀವನ ನಡೆಸಿದ ನಮ್ಮ ಪೂರ್ವಜರ ಆಸ್ತಿ ಅಂತಸ್ತು, ಒಡವೆ ಬಂಗಾರ, name and fame ಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡದೆ ಬಂಧು-ಬಾಂಧವರು, ನೆಂಟರಿಷ್ಟರು,ಸ್ನೇಹಿತರ ಗಳೊಂದಿಗೆ ಹೆಚ್ಚು ಖುಷಿಯಾಗಿದ್ದರು. ದೂರದ ಊರುಗಳಿಗೆ ಕಾಲ್ನಡಿಗೆಯಲೋ ಎತ್ತಿನಗಾಡಿಯಲ್ಲಿ ಸಂಚರಿಸುತ್ತಿದ್ದರಿಂದ ಹೆಚ್ಚು ಆರೋಗ್ಯವಂತರಾಗಿದ್ದರು.
ಹೀಗೆಂದ ಮಾತ್ರಕ್ಕೆ ನಮ್ಮ ಪೂರ್ವಜರು ಬಡವರಾಗಿದ್ದಾರೆ ಎಂದೇನು ಹೇಳುತ್ತಿಲ್ಲ ಅವರು ಶ್ರೀಮಂತರಾಗಿದ್ದರು ಆದರೆ ಅದನ್ನು ಅಳೆಯುವ ಮಾನ ಬೇರೆಯಾಗಿತ್ತು ಅಷ್ಟೇ ಅವರು ತಮ್ಮ ಶ್ರೀಮಂತಿಕೆಯನ್ನು ಅವರ ಜಮೀನುಗಳಲ್ಲಿ ಬೆಳೆಸಿ ದಂತಹ ಒಟ್ಟು ಮರಗಳ ಸಂಖ್ಯೆಯನ್ನು ಆಧರಿಸಿ ಮನೆಯಲ್ಲಿ ಸಾಕಿರುವಂತಹ ಕರು, ಕುರಿ, ದನ,ಮೇಕೆ,ಕತ್ತೆ,ಕುದುರೆ, ಕುನ್ನಿ, ಬೆಕ್ಕು, ಹೀಗೆ ನಾನಾ ಬಗೆಯ ಪ್ರಾಣಿಗಳೊಂದಿಗೆ ಶ್ರೀಮಂತರಾಗಿದ್ದರು.
ಹಣವೇ ಸರ್ವಸ್ವಕೂ ಮೂಲ ಎಂದು ಹಣದ ಹಿಂದೆ ಓಡಿ ನಾವೆಲ್ಲರೂ ಅದೋಗತಿಗೆ ತಲುಪಿದ್ದೇವೆ.
ನಮ್ಮೆಲ್ಲರ ಶ್ರೀಮಂತಿಕೆಯನ್ನು ಅಳೆಯುವ ಮಾನ ಬದಲಾಗಿದೆ. ನಗರವಾಸಿಗಳಆಗಿರುವ ನಾವು ಎಷ್ಟೆಷ್ಟು ದೊಡ್ಡ ಬಂಗಲೆಯನ್ನು ಕಟ್ಟಿದ್ದೇವೆ?ಎಷ್ಟು ಬೆಲೆಬಾಳುವ ಇಂಟೀರಿಯರ್ ಗಳನ್ನು ಉಪಯೋಗಿಸಿದ್ದೇವೆ ? ಹಾಗೂ ಊರುಕೇರಿಯ ತುಂಬೆಲ್ಲ ಎಷ್ಟೆಷ್ಟು ಪ್ರಾಪರ್ಟಿ ಗಳನ್ನು ಮಾಡಿದ್ದೇವೆ?ಪಕ್ಕದ ಮನೆಯವರು ತಂದಿದ್ದಾರೆ ಎಂದು ಎಷ್ಟೆಲ್ಲಾ ಎಲೆಕ್ಟ್ರಾನಿಕ್ ಐಟಂಗಳನ್ನು ಮನೆಯಲ್ಲಿ ಗುಡ್ಡೆ ಮಾಡಿಕೊಂಡಿದ್ದೇವೆ?ಹೊರಗೆ ಓಡಾಡಲು ಮೂರು ನಾಲ್ಕುತರಹದ ಕಾರು ಸ್ಕೂಟರ್ ಗಳನ್ನೆಲ್ಲವನ್ನು ಮನೆಗೆ ತೆಗೆದುಕೊಂಡು ಬಂದು ದಿನದಿನದ ಖರ್ಚುಗಳನ್ನು ಇಮ್ಮಡಿಗೊಳಿಸಿಕೊಳ್ಳುತ್ತಿದ್ದೇವೆ.
ಯಾರೋ ಕೊಳ್ಳೆ ಹೊಡೆದ ಹಣದಲ್ಲಿ ಆಡಂಬರವಾಗಿ ವಿವಾಹ ಮಾಡುತ್ತಾರೆಂದು ತಾವೂ ಕೂಡ ಹೊರಗಿನಿಂದ ಸಾಲ ತಂದು ಮದುವೆ ಮಾಡಿ ಮುಗಿಸಿದ ಮೇಲೆ ತೆಗೆದುಕೊಂಡ ಸಾಲವನ್ನು ತೀರಿಸಲಾಗದೆ ಇರುವ ಆಸ್ತಿಪಾಸ್ತಿಯನ್ನು ಮಾರಿಕೊಂಡು ಬೀದಿಗೆ ಬಿದ್ದಿದ್ದಾನೆ.
ಸಂಪಾದಿಸಿ ಶ್ರೀಮಂತರಾಗಬೇಕು ಎನ್ನುವುದೇನೋ ನಿಜ ಆದರೆ ಸಂಪಾದಿಸುವ ಬರದಲ್ಲಿ ತಾನು ಉಪಯೋಗಿಸಿಕೊಳ್ಳದೇ 4 ತಲೆಮಾರುಗಳಿಗಾಗುವ ಅಷ್ಟನ್ನು ಮಾಡಿಟ್ಟು ಹೋಗುತ್ತಾನೆ. ತಾತ ಮುತ್ತಾತಂದಿರು ಮಾಡಿಟ್ಟಿರುವ ಆಸ್ತಿಯನ್ನು ಕರಗಿಸುತ್ತಾ ಐಷಾರಾಮಿ ಜೀವನಕ್ಕೆ ಹೊಂದಿಕೊಂಡ ಮುಂದಿನ ತಲೆಮಾರುಗಳು ತಮ್ಮ ಶ್ರೀಮಂತಿಕೆಯನ್ನು ಜ್ಞಾನದ ದೃಷ್ಟಿಯಿಂದ ಹೊರತುಪಡಿಸಿ ಇನ್ನೆಲ್ಲ ರೀತಿಯ ದುಶ್ಚಟಗಳನ್ನು ಕರಗತ ಮಾಡಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾನೇ. ಎಲ್ಲಾ ರೀತಿಯ ಸೌಕರ್ಯಗಳಿದ್ದರೂ ಕೂಡ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಒಂದು ಪುಸ್ತಕ ಒಬ್ಬ ಸ್ನೇಹಿತನಿಗಿಂತಲೂ ಮಿಗಿಲು ಎಂದು ತಿಳಿದಿದ್ದರೂ ಕೂಡ ಮನೆಯಲ್ಲಿ ಒಂದು ಪುಸ್ತಕ ಇಲ್ಲದ ಹಾಗೆ ಗುಜರಿಗೆ ಸೇರಿಸಿದ್ದಾನೆ. ಮರದ ಕೆಳಗೆ ವಾಹನಗಳನ್ನು ನಿಲ್ಲಿಸಿದರೆ ಎಲೆ ಉದುರುತ್ತದೆ ಎಂದು ಇರುವ ಮರವನ್ನು ಕಡಿಸಿ ಶೆಡ್ ಕೆಳಗೆ ನಿಲ್ಲಿಸಿದ್ದಾನೆ ಹೀಗೆ ದಿನದಿಂದ ದಿನಕ್ಕೆ ಮಾನವೀಯತೆಯನ್ನು ಮರೆಯುತ್ತಿದ್ದಾನೇ.
ಸ್ವಾವಲಂಬಿಗಳಾಗಿದ್ದಂತಹ ನಮ್ಮ ಹಳ್ಳಿಯ ಜನರಿಗೆ ಹಣದ ಆಮಿಷವೊಡ್ಡಿ ನಗರಗಳಿಗೆ ಕರೆಯಿಸಿಕೊಂಡು ಅವರನ್ನು ಗುಲಾಮರನ್ನಾಗಿ ಸಿದ್ದೇವೆ ಈ ಗುಲಾಮಗಿರಿಯಲ್ಲಿ ವಿದ್ಯಾವಂತರ ಪಾಲೇನು ಕಡಿಮೆ ಇಲ್ಲ ಆರು ಕಾಸು ಸಂಪಾದಿಸುವ ನಿಟ್ಟಿನಲ್ಲಿ ಜಗತ್ತಿನ ಯಾವುದೇ ಮೂಲೆಯ ಅವರಿಗೆ ಬೇಕಾದ ಕೆಲಸವನ್ನು ತಾನು ಮಾಡಿ ಇನ್ನಾರನ್ನು ಉದ್ಧಾರ ಮಾಡಿ ಇದೇ ತನ್ನ ಸಾಧನೆ ಎಂದು ಹೆಮ್ಮೆ ಪಡುತ್ತಾನೆ.
ಇತ್ತ ನಮ್ಮ ಸರಕಾರಗಳು ಸ್ವಾಭಾವಿಕ ಕೃಷಿ ಮಾಡಿಕೊಂಡು ಹಾಯಾಗಿದ್ದ ಕೃಷಿಕರಿಗೆ ಹೈಬ್ರಿಡ್ ಬೀಜಗಳು, ರಸಗೊಬ್ಬರ, ಕ್ರಿಮಿನಾಶಕಗಳನ್ನು ನೀಡಿ ಭೂಮಿಗೆ ವಿಷವುಣಿಸಿದ ಫಲವಾಗಿಯೇ ಭೂಮಿ ಬಂಜರಾಗಿದೆ ಕೃಷಿಯನ್ನೇ ನಂಬಿದ ರೈತರ ಆರ್ಥಿಕ ಪರಿಸ್ಥಿತಿಯನ್ನು ಅದೋಗತಿಗೆ ತಳ್ಳಿ ಆತ್ಮಹತ್ಯೆಗೆ ಗುರಿಯಾಗಿದ್ದಾರೆ. ಇದರಿಂದ ಬೇಸತ್ತ ರೈತಾಪಿ ವರ್ಗ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.
ಜಗತ್ತು ಬದಲಾಗುತ್ತಿದೆ ಎಂಬ ಮೌಡ್ಯದಲ್ಲಿ ಬದಲಾಗುತ್ತಿರುವ ಜನರ ಮನೋಭಾವನೆ ಗಳೊಂದಿಗೆ ಬೆರೆತು ತಾನು ಬದಲಾಗಿದ್ದಾನೆ. ಅದೇನೇ ಇರಲಿ ಇಂದು ಕರೋನ ವಿಷಯವಾಗಿ ನಗರವಾಸಿಗಳು ಮರಳಿ ಹಳ್ಳಿ ಸೇರಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಪೂರ್ವಜರು ಸಹಜಕೃಷಿಯಲ್ಲಿ ಮಾಡಿದಂತಹ ಸಾಧನೆಗಳನ್ನು ಮೆಲುಕು ಹಾಕಬೇಕಾಗಿದೆ ಹಾಗೂ ಯಾವ ಹಂತದಲ್ಲಿ ಕೃಷಿ ವಿಫಲತೆಯ ಹಾದಿಯನ್ನು ಹಿಡಿಯಿತು ಎಂದು ತಿಳಿದುಕೊಳ್ಳಬೇಕಾಗಿದೆ. ಕೃಷಿ ಸಾಕಷ್ಟು ಬದಲಾವಣೆಗಳನ್ನು ಕಂಡರೂ ಕೂಡ ನಮ್ಮ ಪೂರ್ವಜರ ಪದ್ಧತಿಗಳನ್ನು ಪಾಲಿಸಿಕೊಂಡು ಕೃಷಿಯಲ್ಲಿ ಸಾಧನೆ ಮಾಡಿದಂತಹ ನಾರಾಯಣ್ ರೆಡ್ಡಿ, ಅಯ್ಯಪ್ಪ ಮಸಗಿ,ನರೇಂದ್ರ ರೈ ದೇರ್ಲ, ವಸಂತ ಕಜೆ ನಮಗೆ ಮಾರ್ಗದರ್ಶಕರಾಗುತ್ತಾರೆ. ಈ ನಿಟ್ಟಿನಲ್ಲಿ ಯುವಜನತೆ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸ್ವಾವಲಂಬಿಗಳಾಗುವುದುರ ಮೂಲಕ ನಮ್ಮ ದೇಶದಲ್ಲಿ ಮತ್ತೊಮ್ಮೆ ನೈಸರ್ಗಿಕ ಹಸಿರು ಕ್ರಾಂತಿಯನ್ನು ಮಾಡಿಸಬಹುದಾಗಿದೆ.
ನಮಗೆ ಇಂದು ಬೇಕಾಗಿರುವುದು ಜಗತ್ತನ್ನು ಮೆಚ್ಚಿಸುವ ಕಾಯಕವಲ್ಲ ಅಥವಾ ಜಗತ್ತಿನ ಆರ್ಥಿಕತೆಯ ಓಟದಲ್ಲಿ ಜೀವನ ಸವೆಸುವುದಕಲ್ಲ ಬದಲಿಗೆ ಪರಿಸರದೊಂದಿಗೆ ಸಮೃದ್ಧ ಜೀವನವನ್ನು ನಡೆಸುವುದಾಗಿದೆ.......
